ಮಂಡ್ಯ ಲೋಕಸಭೆ ಚುನಾವಣೆ ಸುಮಲತಾ ಪರ ಪ್ರಚಾರಕ್ಕೆ ಕಿಚ್ಚ ಸುದೀಪ್ ಎಂಟ್ರಿ!
![](https://janamiditha.com/wp-content/uploads/2019/03/mqdefault-1.jpg)
ಮಂಡ್ಯ ಲೋಕಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಇದೀಗ ಸುದೀಪ್ ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.
![](https://janamiditha.com/wp-content/uploads/2019/03/x3sumalathaandsudeep-1553056168-1553064101-jpg-pagespeed-ic-wq1ph0xtpt-1553679819.jpg)
ಈಗಾಗಲೇ ಸುಮಲತಾ ಪರ ದರ್ಶನ್ ಹಾಗೂ ಯಶ್ ಪ್ರಚಾರ ನಡೆಸುವುದಾಗಿ ಹೇಳಿದ್ದರು. ಇದೀಗ ಸುದೀಪ್ ಅವರೂ ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
![](https://janamiditha.com/wp-content/uploads/2019/03/4sudeepandsumalatha-1552019627.jpg)
ಸುಮಲತಾ ಅಂಬರೀಶ್ ಪರ ನಟ ಕಿಚ್ಚ ಸುದೀಪ್ ಏಪ್ರಿಲ್ 10 ಹಾಗೂ 11 ರಂದು ಸುಮಲತಾ ಪರವಾಗಿ ಮಳವಳ್ಳಿ ಸೇರಿದಂತೆ ಹಲವೆಡೆ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಈ ಹಿಂದೆ ಸುಮಲತಾ ಅಂಬರೀಶ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದರು. ಅದರಂತೆ ಇದೀಗ ಸುಮಲತಾ ಪ್ರಚಾರಕ್ಕೆ ಬರುತ್ತಿದ್ದಾರೆ.