ದಾವಣಗೆರೆ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪ
ದಾವನಗೆರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಅವರ ಹೆಸರು ಅಂತಿಮವಾಗಿದೆ.
![](https://janamiditha.com/wp-content/uploads/2019/03/images-2.jpeg)
ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ವಯಸ್ಸಿನ ಕಾರಣ ನೀಡಿ ಮನೆ ಬಾಗಿಲಿಗೆ ಬಂದಿದ್ದ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರು.ಹಾಗಾಗಿ ಈಗ ಮಂಜಪ್ಪ ಅವರ ಹೆಸರನ್ನು ಅಂತಿಮವಾಗಿ ಶಿವಶಂಕರಪ್ಪ ಅವರ ಶಿಫಾರಸ್ಸು ಮೇರೆಗೆ ಅಂತಿಮಗೊಳಿಸಲಾಗಿದೆ.
![](https://janamiditha.com/wp-content/uploads/2019/03/manjappa-1553683601.jpg)
ಇಂದು ಮಂಜಪ್ಪ ಅವರು ಡಾ. ಶಿವಶಂಕರಪ್ಪ ಅವರ ಆಶೀರ್ವಾದ ಪಡೆದು ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಈ ನಡುವೆ ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಹಾಗೂ ಚೆನ್ನಗಿರಿ ಮಾಜಿ ಶಾಸಕ ವಡ್ನಾಲ್ ರಾಜಣ್ಣ ಅವರುಗಳನ್ನು ಸಹ ಸ್ಪರ್ದಿಸಲು ಕೇಳಲಾಗಿತ್ತು.ಆದರೆ ಅವರುಗಳು ಸಹ ಆಸಕ್ತಿ ತೋರಲಿಲ್ಲ ಎನ್ನಲಾಗಿದೆ.