ಕರ್ನಾಟಕಕ್ಕೂ ಇದೆಯೇ ಉಗ್ರಗಾಮಿ ನಂಟು?
ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹುನ್ನಾರ ನಡೆಸಿದ್ದ ಆರೋಪದಡಿ ಅಜೀಜ್ (45 ವರ್ಷ) ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.
![](https://janamiditha.com/wp-content/uploads/2019/03/top_news_1553344218.jpg)
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ಅಜೀಜ್ ಎಂಬಾತನನ್ನು ಹಿಂಬಾಲಿಸಿ ಆತನನ್ನು ಬಂಧಿಸಿದಾಗ ಆತನ ಬಳಿ ಜಿಲೆಟಿನ್ ಕಡ್ಡಿಗಳು, ಸ್ಫೋಟಕಗಳು, ಹಾಗೂ ಪೆಟ್ರೋಲ್ ಬಾಂಬ್ಗಳು ಸಹ ಲಭ್ಯವಾಗಿವೆ .
![](https://janamiditha.com/wp-content/uploads/2019/03/kalasa.jpg)
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈತನಿಗೆ ಉಗ್ರಗಾಮಿ ಸಂಘಟನೆಗಳ ಜೊತೆ ನಂಟೇನಾದರೂ ಇದೆಯೇ, ಸ್ಫೋಟಕಗಳು ಹಾಗೂ ಪೆಟ್ರೋಲ್ ಬಾಂಬ್ಗಳನ್ನು ಈತ ಏಕೆ ಸಂಗ್ರಹಿಸಿದ್ದ ಎಂಬ ಕುರಿತು ವಿಚಾರಣೆ ಮುಂದುವರೆದಿದೆ.